Sunday, November 28, 2010

ನಮ್ಮ ತಂಡ

ಕೇಂದ್ರ ಸಮಿತಿಯ ಸದಸ್ಯರು:


ಕಿರಣ್.ಎಂ
ವಾಸ: ಬೆಂಗಳೂರು
ವೃತ್ತಿ: ಇಂಡಿಯಾ ಇನ್ಫೋ ಲೈನ್ ಉದ್ಯೋಗಿ
ಫೇಸ್ ಬುಕ್






Link

ಸುಪ್ರೀತ್.ಕೆ.ಎಸ್
ವಾಸ: ಬೆಂಗಳೂರು
ಇಂಜಿನಿಯರಿಂಗ್ ವಿದ್ಯಾರ್ಥಿ, ಯವಿಸಿಇ ಕಾಲೇಜು
ಫೇಸ್ ಬುಕ್









ರೂಪಲಕ್ಷ್ಮಿ.ಎಂ.ಎಸ್












ಮುಕುಂದ್













ಮಂಸೋರೆ


ವೃತ್ತಿ: ದೃಶ್ಯ ಕಲಾವಿದ
ಆಸಕ್ತಿ:
ಪ್ರತಿ ಮುಂದಿನ
ಕ್ಷಣ



ಹೇಮ ಪವಾರ್






















ಅವಿನಾಶ್.ಜಿ

Saturday, November 27, 2010

ವಾರಾಂತ್ಯದ ಭೇಟಿ 2

ಎರಡನೆಯ ವಾರಾಂತ್ಯದ ಭೇಟಿಯಲ್ಲಿ ಸೇರಿದ ಸದಸ್ಯರು:

ಸುಪ್ರೀತ್
ಕಿರಣ್
ರೂಪಲಕ್ಷ್ಮಿ
ಹೇಮಾ ಪವಾರ್
ಅವಿನಾಶ್.ಜಿ

ಸ್ಥಳ ಹಾಗೂ ಸಮಯ:

ಸಂಸ ಬಯಲು ರಂಗ ಮಂದಿರ, ಬೆಂಗಳೂರು
ಮಧ್ಯಾನ ಮೂರು ಗಂಟೆಯಿಂದ ಐದುವರೆವರೆಗೆ.

ಭೇಟಿಯ ಸಂದರ್ಭದಲ್ಲಿ ಚರ್ಚಿಸಿದ ವಿಷಯ:

ಪ್ರತಿಯೊಬ್ಬರೂ ತಾವು ಹಿಂದಿನ ವಾರ ತಯಾರು ಮಾಡಿದ ಕತಾ ಹಂದರವನ್ನು ಹಂಚಿಕೊಂಡರು.
ಪ್ರತಿಯೊಂದು ಕತೆಯ ತಪ್ಪು ಒಪ್ಪುಗಳು, ಶಕ್ತಿ, ಬಲಹೀನತೆಗಳನ್ನು ಚರ್ಚಿಸಲಾಯಿತು.
ಚಿತ್ರೀಕರಣದಲ್ಲಿ ನಮಗೆ ಎದುರಾಗಬಹುದಾದ ಸಂಪನ್ಮೂಲದ ಮಿತಿ, ನಮ್ಮ ಸಾಮರ್ಥ್ಯವನ್ನು ಕುರಿತು ಆಲೋಚಿಸಿ ಕತೆಯನ್ನು ಆಯ್ಕೆ ಮಾಡುವುದೆಂದು ತೀರ್ಮಾನಿಸಲಾಯ್ತು.
ಸರ್ವಾನುಮತದ ಮೂಲಕ ಕಿರಣ್ ಬಿಡಿಸಿಟ್ಟ ಕತಾ ಹಂದರವನ್ನು ಒಪ್ಪಿಕೊಳ್ಳಲಾಯ್ತು.

ಎರಡು ಸದೃಢವಾದ ಪಾತ್ರಗಳ ಸುತ್ತ ಸುತ್ತುವ ಕತೆಯನ್ನು ಕಿರಣ್ ಮತ್ತೊಮ್ಮೆ ಸದಸ್ಯರಿಗೆಲ್ಲ ಹೇಳಿದರು. ಸ್ಥಳದಲ್ಲೇ ಉಳಿದವರೆಲ್ಲ ಆ ಕತೆಯನ್ನು ನಾಲ್ಕೈದು ಸಾಲುಗಳಲ್ಲಿ ತಮ್ಮ ಗ್ರಹಿಕೆಗೆ ತಕ್ಕಂತೆ ಟಿಪ್ಪಣಿ ಮಾಡಿಕೊಂಡರು.

ಮುಂದಿನ ವಾರಾಂತ್ಯದ ಭೇಟಿಯ ವೇಳೆಗೆ ಸ್ಕ್ರಿಪ್ಟ್ ಜವಾಬ್ದಾರಿಯನ್ನು ಹೊತ್ತಿರುವ ಸದಸ್ಯರು ದೃಶ್ಯಗಳಾಗಿ ವಿಂಗಡಿಸಿದ ಒಂದು ಸಾಲಿನ ಕತೆಯನ್ನು ತಯಾರು ಮಾಡಿಕೊಳ್ಳಬೇಕು ಎಂದು ನಿರ್ಧರಿಸಲಾಯ್ತು.

ಸದ್ಯ ಸರ್ವರ ಒಪ್ಪಿಗೆಯನ್ನು ಪಡೆದ ಕತಾ ಹಂದರದ ಚಿಕ್ಕ ತುಣುಕನ್ನು ಕೇಂದ್ರ ಸಮಿತಿಯ ಸದಸ್ಯರ ವೈಯಕ್ತಿಕ ಮೇಲ್ ಐಡಿಗಳಿಗೆ ಕಳಿಸಲಾಗುವುದು. ಕತೆ ಒಪ್ಪಿತವಾಗಿ ಚಿತ್ರಕತೆಯ ಮೊದಲ ಡ್ರಾಫ್ಟ್ ತಯಾರಾದಾಗ ಕತಾ ಹಂದರವನ್ನು ಇಡಿಯಾಗಿ ‘ಭೂತಗನ್ನಡಿ’ ಬ್ಲಾಗಿನಲ್ಲಿ ಪ್ರಕಟಿಸಲಾಗುವುದು.

ನಮ್ಮ ಕೆಲಸದ ಕುರಿತ ಅಪ್ ಡೇಟ್ ಗಳಿಗಾಗಿ ನಮ್ಮನ್ನು ಟ್ವಿಟರ್ ನಲ್ಲಿ ಫಾಲೋ ಮಾಡಬಹುದು.
ಫೇಸ್ ಬುಕ್ಕಿನಲ್ಲಿ ನಮ್ಮ ಪುಟಕ್ಕೆ ಸಂದರ್ಶಿಸಿ ಸಂಪರ್ಕದಲ್ಲಿರಬಹುದು.

Friday, November 26, 2010

ಕತಾ ಹಂದರದ ಚರ್ಚೆ

ಕಳೆದ ವಾರದ ಭೇಟಿಯಲ್ಲಿ ನಾವು ಕೇಂದ್ರ ಸಮಿತಿಯನ್ನು ಒಟ್ಟುಗೂಡಿಸಿ ಹಲವು ನಿಬಂಧನೆಗಳನ್ನು ಚರ್ಚಿಸಿದ್ದೆವು. ಈ ಸಭೆಯಲ್ಲಿ ಮುಂದಿನ ವಾರ ಕತೆಯ ರೂಪು ರೇಷೆ ಹಾಗೂ ಕಥಾವಸ್ತುವನ್ನು ಕುರಿತು ಸಿದ್ಧತೆ ನಡೆಸಿಕೊಂಡು ಬರಬೇಕೆಂದು ತೀರ್ಮಾನಿಸಲಾಗಿತ್ತು.

ಈ ನಿಟ್ಟಿನಲ್ಲಿ ನಾಳೆ ಶನಿವಾರ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ಬಳಿ ನಮ್ಮ ತಂಡವು ಭೇಟಿಯಾಗಲಿದೆ.

ಭಾಗವಹಿಸುತ್ತಿರುವವರು:

ಕಿರಣ್
ಸುಪ್ರೀತ್.ಕೆ.ಎಸ್
ರೂಪಲಕ್ಷ್ಮಿ.ಎಂ.ಎಸ್
ಮುಕುಂದ್

ಭೇಟಿಯ ಆಗುಹೋಗುಗಳನ್ನು ಹಾಗೂ ಒಟ್ಟು ನಿರ್ಧಾರಗಳನ್ನು ಟ್ವಿಟರಿನಲ್ಲಿ ಅಪ್ಡೇಟ್ ಮಾಡಲಾಗುವುದು.

Saturday, November 20, 2010

ಕೇಂದ್ರ ಸಮಿತಿಯ ಘೋಷಣೆ ಹಾಗೂ ನಿಬಂಧನೆಗಳು

ಸಿನೆಮಾ ನಿರ್ಮಾಣ ತಂಡದ ಕೇಂದ್ರ ಸಮಿತಿಯಲ್ಲಿರುವ ಸದಸ್ಯರ ಪಟ್ಟಿ ಹೀಗಿದೆ:

ಮಂಜುನಾಥ್.ಎಸ್

ಕಿರಣ್.ಎಂ

ರೂಪಾ ರಾಜೀವ್

ಹೇಮಾ ಪವಾರ್

ಸುಪ್ರೀತ್.ಕೆ.ಎಸ್

ಅವಿನಾಶ್.ಜಿ

ಮುಕುಂದ್

ಕೇಂದ್ರ ಸಮಿತಿಯ ಸದಸ್ಯರ ಕರ್ತವ್ಯ ಹಾಗೂ ಅಧಿಕಾರಗಳು:

* ವೃತ್ತಿ, ವೈಯಕ್ತಿಕ, ಸಾಂಸಾರಿಕ ಜವಾಬ್ದಾರಿಗಳನ್ನು ಹೊರತುಪಡಿಸಿ ಪ್ರಾಜೆಕ್ಟ್ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ ಪಕ್ಷ ಆರು ತಿಂಗಳು ಬದ್ಧವಾಗಿರಬೇಕು.

* ತಂಡದಿಂದ ಹೊರಹೋಗುವ ಸಂದರ್ಭದಲ್ಲಿ ಸೂಕ್ತವಾದ ಬದಲಿ ವ್ಯಕ್ತಿಯನ್ನು ವ್ಯವಸ್ಥೆ ಮಾಡಿಯೇ ಹೊರಡಬೇಕು.

* ತಂಡದ ವತಿಯಿಂದ ತೆರೆದ ಬ್ಯಾಂಕ್ ಖಾತೆಯನ್ನು ತೆರೆದು ಪ್ರತಿ ಸದಸ್ಯರು ತಲಾ ಹತ್ತು ಸಾವಿರ ರುಪಾಯಿಗಳನ್ನು ಠೇವಣಿಯಾಗಿ ಇಡಬೇಕು. ಈ ಮೊತ್ತವನ್ನು ಯಾವುದೇ ಕಾರಣಕ್ಕೆ ಹಿಂದಿರುಗಿಸಲಾಗುವುದಿಲ್ಲ.

* ವೈಯಕ್ತಿಕ ದೋಷಾರೋಪಣೆ, ಮನಸ್ಥಾಪ, ಜಗಳಗಳ ಕಾರಣ ಮುಂದೊಡ್ಡಿ ಪ್ರಾಜೆಕ್ಟಿನಿಂದ ಹೊರಹೋಗುವುದಿಲ್ಲ ಎಂದು ಲಿಖಿತ ಹೇಳಿಕೆಯ ಮೂಲಕ ದೃಢಪಡಿಸಬೇಕು.

* ಸಮಿತಿಯ ಕಲಾಪಗಳಲ್ಲಿ ಚರ್ಚಿಸಿ ವಿಂಗಡಿಸಿ, ಅಂಗೀಕರಿಸಿದ ಕರ್ತವ್ಯ/ಕೆಲಸಗಳನ್ನು ಚಾಚೂ ತಪ್ಪದೆ ನಿರ್ವಹಿಸಬೇಕು. ಸರ್ವರೂ ಸಮ್ಮತಿಸಿದ ಹೈರಾರ್ಕಿಗೆ ಚ್ಯುತಿ ಬರದ ಹಾಗೆ ಜವಾಬ್ದಾರಿ ಹಾಗೂ ಅಧಿಕಾರ ಅರಿತು ಕೆಲಸ ಮಾಡಬೇಕು.

* ಈ ಎಲ್ಲಾ ಚಟುವಟಿಕೆಗಳು ದೃಶ್ಯ ಸಂಸ್ಕೃತಿಗೆ ಮಾತ್ರ ಸಂಬಂಧ ಪಟ್ಟಿರುವಂತೆ ಎಚ್ಚರವಹಿಸಬೇಕು. ಸಾಹಿತ್ಯ ಮೊದಲಾದ ಬೇರಾವ ಸಂಗತಿಯೂ ಇದರಲ್ಲಿ ಮಿಶ್ರಣವಾಗಬಾರದು.

* ಕೇಂದ್ರ ಸಮಿತಿಯ ಸದಸ್ಯರಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಬೇಧ ಮಾಡಿದಾಗ ನಿರ್ಣಾಯಕ ಅಭಿಪ್ರಾಯವನ್ನು ಕೊಡುವ ಅಧಿಕಾರವನ್ನು ಶ್ರೀ ಶೇಖರ್ ಪೂರ್ಣರಿಗೆ ವಹಿಸಲಾಗಿದೆ. ಅವರ ತೀರ್ಮಾನವೇ ಅಂತಿಮ ಎಂದು ಪರಿಗಣಿಸಬೇಕು. ಅದಕ್ಕೆ ಬದ್ಧರಾಗಿರಬೇಕು.

* ಎಲ್ಲಾ ಚಟುವಟಿಕೆಗಳು ಸಂವಾದ ಡಾಟ್ ಕಾಮ್ ಆಶಯದಡಿಯಲ್ಲಿ ನಡೆಯುವುದು. ನಮ್ಮ ತಂಡದ ಪ್ರಾಡಕ್ಟ್ ಸಂವಾದ ಡಾಟ್ ಕಾಮ್ ನ ಆಸ್ತಿಯಾಗಿರುತ್ತದೆ.

Friday, November 19, 2010

ವಾರಾಂತ್ಯದ ಭೇಟಿ

ಕೆಲಸದ ಒತ್ತಡಗಳಿಂದಾಗಿ ಹಲವು ದಿನಗಳಿಂದ ಭೂತಗನ್ನಡಿ ಬ್ಲಾಗ್ ನ್ನು ಅಪ್ ಡೇಟ್ ಮಾಡಲಾಗಿಲ್ಲ.

ಹಿಂದಿನ ಪೋಸ್ಟಿನಲ್ಲಿ ಪಟ್ಟಿ ಮಾಡಿದ ಬರಹಗಳು ಶೀಘ್ರವೇ ಪ್ರಕಟವಾಗಲಿವೆ.

ಈ ಶನಿವಾರ ಸಂಜೆ ನಮ್ಮ ತಂಡ ಭೇಟಿಯಾಗಿ ಮುಂದಿನ ಕಾರ್ಯ ಕಲಾಪಗಳ ಕುರಿತು ಯೋಜನೆ ಹಾಕಿಕೊಳ್ಳಲಿದೆ. ಈ ಭೇಟಿಯಲ್ಲಿನ ವಿದ್ಯಮಾನಗಳ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಟ್ವಿಟರ್ ನಲ್ಲಿ ಅಪ್ ಡೇಟುಗಳನ್ನು ಪ್ರಕಟಿಸಲಾಗುವುದು. ಟ್ವಿಟರ್ ಸಂದೇಶಗಳನ್ನು ಪಡೆಯುವುದಕ್ಕೆ ಭೂತಗನ್ನಡಿಯ ಟ್ವಿಟರ್ ಪುಟಕ್ಕೆ ಭೇಟಿ ನೀಡಿ.