Showing posts with label ಕೇಂದ್ರ ಸಮಿತಿ. Show all posts
Showing posts with label ಕೇಂದ್ರ ಸಮಿತಿ. Show all posts

Saturday, November 20, 2010

ಕೇಂದ್ರ ಸಮಿತಿಯ ಘೋಷಣೆ ಹಾಗೂ ನಿಬಂಧನೆಗಳು

ಸಿನೆಮಾ ನಿರ್ಮಾಣ ತಂಡದ ಕೇಂದ್ರ ಸಮಿತಿಯಲ್ಲಿರುವ ಸದಸ್ಯರ ಪಟ್ಟಿ ಹೀಗಿದೆ:

ಮಂಜುನಾಥ್.ಎಸ್

ಕಿರಣ್.ಎಂ

ರೂಪಾ ರಾಜೀವ್

ಹೇಮಾ ಪವಾರ್

ಸುಪ್ರೀತ್.ಕೆ.ಎಸ್

ಅವಿನಾಶ್.ಜಿ

ಮುಕುಂದ್

ಕೇಂದ್ರ ಸಮಿತಿಯ ಸದಸ್ಯರ ಕರ್ತವ್ಯ ಹಾಗೂ ಅಧಿಕಾರಗಳು:

* ವೃತ್ತಿ, ವೈಯಕ್ತಿಕ, ಸಾಂಸಾರಿಕ ಜವಾಬ್ದಾರಿಗಳನ್ನು ಹೊರತುಪಡಿಸಿ ಪ್ರಾಜೆಕ್ಟ್ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ ಪಕ್ಷ ಆರು ತಿಂಗಳು ಬದ್ಧವಾಗಿರಬೇಕು.

* ತಂಡದಿಂದ ಹೊರಹೋಗುವ ಸಂದರ್ಭದಲ್ಲಿ ಸೂಕ್ತವಾದ ಬದಲಿ ವ್ಯಕ್ತಿಯನ್ನು ವ್ಯವಸ್ಥೆ ಮಾಡಿಯೇ ಹೊರಡಬೇಕು.

* ತಂಡದ ವತಿಯಿಂದ ತೆರೆದ ಬ್ಯಾಂಕ್ ಖಾತೆಯನ್ನು ತೆರೆದು ಪ್ರತಿ ಸದಸ್ಯರು ತಲಾ ಹತ್ತು ಸಾವಿರ ರುಪಾಯಿಗಳನ್ನು ಠೇವಣಿಯಾಗಿ ಇಡಬೇಕು. ಈ ಮೊತ್ತವನ್ನು ಯಾವುದೇ ಕಾರಣಕ್ಕೆ ಹಿಂದಿರುಗಿಸಲಾಗುವುದಿಲ್ಲ.

* ವೈಯಕ್ತಿಕ ದೋಷಾರೋಪಣೆ, ಮನಸ್ಥಾಪ, ಜಗಳಗಳ ಕಾರಣ ಮುಂದೊಡ್ಡಿ ಪ್ರಾಜೆಕ್ಟಿನಿಂದ ಹೊರಹೋಗುವುದಿಲ್ಲ ಎಂದು ಲಿಖಿತ ಹೇಳಿಕೆಯ ಮೂಲಕ ದೃಢಪಡಿಸಬೇಕು.

* ಸಮಿತಿಯ ಕಲಾಪಗಳಲ್ಲಿ ಚರ್ಚಿಸಿ ವಿಂಗಡಿಸಿ, ಅಂಗೀಕರಿಸಿದ ಕರ್ತವ್ಯ/ಕೆಲಸಗಳನ್ನು ಚಾಚೂ ತಪ್ಪದೆ ನಿರ್ವಹಿಸಬೇಕು. ಸರ್ವರೂ ಸಮ್ಮತಿಸಿದ ಹೈರಾರ್ಕಿಗೆ ಚ್ಯುತಿ ಬರದ ಹಾಗೆ ಜವಾಬ್ದಾರಿ ಹಾಗೂ ಅಧಿಕಾರ ಅರಿತು ಕೆಲಸ ಮಾಡಬೇಕು.

* ಈ ಎಲ್ಲಾ ಚಟುವಟಿಕೆಗಳು ದೃಶ್ಯ ಸಂಸ್ಕೃತಿಗೆ ಮಾತ್ರ ಸಂಬಂಧ ಪಟ್ಟಿರುವಂತೆ ಎಚ್ಚರವಹಿಸಬೇಕು. ಸಾಹಿತ್ಯ ಮೊದಲಾದ ಬೇರಾವ ಸಂಗತಿಯೂ ಇದರಲ್ಲಿ ಮಿಶ್ರಣವಾಗಬಾರದು.

* ಕೇಂದ್ರ ಸಮಿತಿಯ ಸದಸ್ಯರಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಬೇಧ ಮಾಡಿದಾಗ ನಿರ್ಣಾಯಕ ಅಭಿಪ್ರಾಯವನ್ನು ಕೊಡುವ ಅಧಿಕಾರವನ್ನು ಶ್ರೀ ಶೇಖರ್ ಪೂರ್ಣರಿಗೆ ವಹಿಸಲಾಗಿದೆ. ಅವರ ತೀರ್ಮಾನವೇ ಅಂತಿಮ ಎಂದು ಪರಿಗಣಿಸಬೇಕು. ಅದಕ್ಕೆ ಬದ್ಧರಾಗಿರಬೇಕು.

* ಎಲ್ಲಾ ಚಟುವಟಿಕೆಗಳು ಸಂವಾದ ಡಾಟ್ ಕಾಮ್ ಆಶಯದಡಿಯಲ್ಲಿ ನಡೆಯುವುದು. ನಮ್ಮ ತಂಡದ ಪ್ರಾಡಕ್ಟ್ ಸಂವಾದ ಡಾಟ್ ಕಾಮ್ ನ ಆಸ್ತಿಯಾಗಿರುತ್ತದೆ.