Saturday, November 20, 2010

ಕೇಂದ್ರ ಸಮಿತಿಯ ಘೋಷಣೆ ಹಾಗೂ ನಿಬಂಧನೆಗಳು

ಸಿನೆಮಾ ನಿರ್ಮಾಣ ತಂಡದ ಕೇಂದ್ರ ಸಮಿತಿಯಲ್ಲಿರುವ ಸದಸ್ಯರ ಪಟ್ಟಿ ಹೀಗಿದೆ:

ಮಂಜುನಾಥ್.ಎಸ್

ಕಿರಣ್.ಎಂ

ರೂಪಾ ರಾಜೀವ್

ಹೇಮಾ ಪವಾರ್

ಸುಪ್ರೀತ್.ಕೆ.ಎಸ್

ಅವಿನಾಶ್.ಜಿ

ಮುಕುಂದ್

ಕೇಂದ್ರ ಸಮಿತಿಯ ಸದಸ್ಯರ ಕರ್ತವ್ಯ ಹಾಗೂ ಅಧಿಕಾರಗಳು:

* ವೃತ್ತಿ, ವೈಯಕ್ತಿಕ, ಸಾಂಸಾರಿಕ ಜವಾಬ್ದಾರಿಗಳನ್ನು ಹೊರತುಪಡಿಸಿ ಪ್ರಾಜೆಕ್ಟ್ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ ಪಕ್ಷ ಆರು ತಿಂಗಳು ಬದ್ಧವಾಗಿರಬೇಕು.

* ತಂಡದಿಂದ ಹೊರಹೋಗುವ ಸಂದರ್ಭದಲ್ಲಿ ಸೂಕ್ತವಾದ ಬದಲಿ ವ್ಯಕ್ತಿಯನ್ನು ವ್ಯವಸ್ಥೆ ಮಾಡಿಯೇ ಹೊರಡಬೇಕು.

* ತಂಡದ ವತಿಯಿಂದ ತೆರೆದ ಬ್ಯಾಂಕ್ ಖಾತೆಯನ್ನು ತೆರೆದು ಪ್ರತಿ ಸದಸ್ಯರು ತಲಾ ಹತ್ತು ಸಾವಿರ ರುಪಾಯಿಗಳನ್ನು ಠೇವಣಿಯಾಗಿ ಇಡಬೇಕು. ಈ ಮೊತ್ತವನ್ನು ಯಾವುದೇ ಕಾರಣಕ್ಕೆ ಹಿಂದಿರುಗಿಸಲಾಗುವುದಿಲ್ಲ.

* ವೈಯಕ್ತಿಕ ದೋಷಾರೋಪಣೆ, ಮನಸ್ಥಾಪ, ಜಗಳಗಳ ಕಾರಣ ಮುಂದೊಡ್ಡಿ ಪ್ರಾಜೆಕ್ಟಿನಿಂದ ಹೊರಹೋಗುವುದಿಲ್ಲ ಎಂದು ಲಿಖಿತ ಹೇಳಿಕೆಯ ಮೂಲಕ ದೃಢಪಡಿಸಬೇಕು.

* ಸಮಿತಿಯ ಕಲಾಪಗಳಲ್ಲಿ ಚರ್ಚಿಸಿ ವಿಂಗಡಿಸಿ, ಅಂಗೀಕರಿಸಿದ ಕರ್ತವ್ಯ/ಕೆಲಸಗಳನ್ನು ಚಾಚೂ ತಪ್ಪದೆ ನಿರ್ವಹಿಸಬೇಕು. ಸರ್ವರೂ ಸಮ್ಮತಿಸಿದ ಹೈರಾರ್ಕಿಗೆ ಚ್ಯುತಿ ಬರದ ಹಾಗೆ ಜವಾಬ್ದಾರಿ ಹಾಗೂ ಅಧಿಕಾರ ಅರಿತು ಕೆಲಸ ಮಾಡಬೇಕು.

* ಈ ಎಲ್ಲಾ ಚಟುವಟಿಕೆಗಳು ದೃಶ್ಯ ಸಂಸ್ಕೃತಿಗೆ ಮಾತ್ರ ಸಂಬಂಧ ಪಟ್ಟಿರುವಂತೆ ಎಚ್ಚರವಹಿಸಬೇಕು. ಸಾಹಿತ್ಯ ಮೊದಲಾದ ಬೇರಾವ ಸಂಗತಿಯೂ ಇದರಲ್ಲಿ ಮಿಶ್ರಣವಾಗಬಾರದು.

* ಕೇಂದ್ರ ಸಮಿತಿಯ ಸದಸ್ಯರಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಬೇಧ ಮಾಡಿದಾಗ ನಿರ್ಣಾಯಕ ಅಭಿಪ್ರಾಯವನ್ನು ಕೊಡುವ ಅಧಿಕಾರವನ್ನು ಶ್ರೀ ಶೇಖರ್ ಪೂರ್ಣರಿಗೆ ವಹಿಸಲಾಗಿದೆ. ಅವರ ತೀರ್ಮಾನವೇ ಅಂತಿಮ ಎಂದು ಪರಿಗಣಿಸಬೇಕು. ಅದಕ್ಕೆ ಬದ್ಧರಾಗಿರಬೇಕು.

* ಎಲ್ಲಾ ಚಟುವಟಿಕೆಗಳು ಸಂವಾದ ಡಾಟ್ ಕಾಮ್ ಆಶಯದಡಿಯಲ್ಲಿ ನಡೆಯುವುದು. ನಮ್ಮ ತಂಡದ ಪ್ರಾಡಕ್ಟ್ ಸಂವಾದ ಡಾಟ್ ಕಾಮ್ ನ ಆಸ್ತಿಯಾಗಿರುತ್ತದೆ.

No comments:

Post a Comment

ನೆನಪಿಡಿ: ನಿಮ್ಮ ಪ್ರತಿಕ್ರಿಯೆ ರಚನಾತ್ಮಕವಾಗಿರಲಿ