Saturday, November 27, 2010

ವಾರಾಂತ್ಯದ ಭೇಟಿ 2

ಎರಡನೆಯ ವಾರಾಂತ್ಯದ ಭೇಟಿಯಲ್ಲಿ ಸೇರಿದ ಸದಸ್ಯರು:

ಸುಪ್ರೀತ್
ಕಿರಣ್
ರೂಪಲಕ್ಷ್ಮಿ
ಹೇಮಾ ಪವಾರ್
ಅವಿನಾಶ್.ಜಿ

ಸ್ಥಳ ಹಾಗೂ ಸಮಯ:

ಸಂಸ ಬಯಲು ರಂಗ ಮಂದಿರ, ಬೆಂಗಳೂರು
ಮಧ್ಯಾನ ಮೂರು ಗಂಟೆಯಿಂದ ಐದುವರೆವರೆಗೆ.

ಭೇಟಿಯ ಸಂದರ್ಭದಲ್ಲಿ ಚರ್ಚಿಸಿದ ವಿಷಯ:

ಪ್ರತಿಯೊಬ್ಬರೂ ತಾವು ಹಿಂದಿನ ವಾರ ತಯಾರು ಮಾಡಿದ ಕತಾ ಹಂದರವನ್ನು ಹಂಚಿಕೊಂಡರು.
ಪ್ರತಿಯೊಂದು ಕತೆಯ ತಪ್ಪು ಒಪ್ಪುಗಳು, ಶಕ್ತಿ, ಬಲಹೀನತೆಗಳನ್ನು ಚರ್ಚಿಸಲಾಯಿತು.
ಚಿತ್ರೀಕರಣದಲ್ಲಿ ನಮಗೆ ಎದುರಾಗಬಹುದಾದ ಸಂಪನ್ಮೂಲದ ಮಿತಿ, ನಮ್ಮ ಸಾಮರ್ಥ್ಯವನ್ನು ಕುರಿತು ಆಲೋಚಿಸಿ ಕತೆಯನ್ನು ಆಯ್ಕೆ ಮಾಡುವುದೆಂದು ತೀರ್ಮಾನಿಸಲಾಯ್ತು.
ಸರ್ವಾನುಮತದ ಮೂಲಕ ಕಿರಣ್ ಬಿಡಿಸಿಟ್ಟ ಕತಾ ಹಂದರವನ್ನು ಒಪ್ಪಿಕೊಳ್ಳಲಾಯ್ತು.

ಎರಡು ಸದೃಢವಾದ ಪಾತ್ರಗಳ ಸುತ್ತ ಸುತ್ತುವ ಕತೆಯನ್ನು ಕಿರಣ್ ಮತ್ತೊಮ್ಮೆ ಸದಸ್ಯರಿಗೆಲ್ಲ ಹೇಳಿದರು. ಸ್ಥಳದಲ್ಲೇ ಉಳಿದವರೆಲ್ಲ ಆ ಕತೆಯನ್ನು ನಾಲ್ಕೈದು ಸಾಲುಗಳಲ್ಲಿ ತಮ್ಮ ಗ್ರಹಿಕೆಗೆ ತಕ್ಕಂತೆ ಟಿಪ್ಪಣಿ ಮಾಡಿಕೊಂಡರು.

ಮುಂದಿನ ವಾರಾಂತ್ಯದ ಭೇಟಿಯ ವೇಳೆಗೆ ಸ್ಕ್ರಿಪ್ಟ್ ಜವಾಬ್ದಾರಿಯನ್ನು ಹೊತ್ತಿರುವ ಸದಸ್ಯರು ದೃಶ್ಯಗಳಾಗಿ ವಿಂಗಡಿಸಿದ ಒಂದು ಸಾಲಿನ ಕತೆಯನ್ನು ತಯಾರು ಮಾಡಿಕೊಳ್ಳಬೇಕು ಎಂದು ನಿರ್ಧರಿಸಲಾಯ್ತು.

ಸದ್ಯ ಸರ್ವರ ಒಪ್ಪಿಗೆಯನ್ನು ಪಡೆದ ಕತಾ ಹಂದರದ ಚಿಕ್ಕ ತುಣುಕನ್ನು ಕೇಂದ್ರ ಸಮಿತಿಯ ಸದಸ್ಯರ ವೈಯಕ್ತಿಕ ಮೇಲ್ ಐಡಿಗಳಿಗೆ ಕಳಿಸಲಾಗುವುದು. ಕತೆ ಒಪ್ಪಿತವಾಗಿ ಚಿತ್ರಕತೆಯ ಮೊದಲ ಡ್ರಾಫ್ಟ್ ತಯಾರಾದಾಗ ಕತಾ ಹಂದರವನ್ನು ಇಡಿಯಾಗಿ ‘ಭೂತಗನ್ನಡಿ’ ಬ್ಲಾಗಿನಲ್ಲಿ ಪ್ರಕಟಿಸಲಾಗುವುದು.

ನಮ್ಮ ಕೆಲಸದ ಕುರಿತ ಅಪ್ ಡೇಟ್ ಗಳಿಗಾಗಿ ನಮ್ಮನ್ನು ಟ್ವಿಟರ್ ನಲ್ಲಿ ಫಾಲೋ ಮಾಡಬಹುದು.
ಫೇಸ್ ಬುಕ್ಕಿನಲ್ಲಿ ನಮ್ಮ ಪುಟಕ್ಕೆ ಸಂದರ್ಶಿಸಿ ಸಂಪರ್ಕದಲ್ಲಿರಬಹುದು.

No comments:

Post a Comment

ನೆನಪಿಡಿ: ನಿಮ್ಮ ಪ್ರತಿಕ್ರಿಯೆ ರಚನಾತ್ಮಕವಾಗಿರಲಿ